ವಾಹ್... ದಾವಣಗೆರೆ
ದಾವಣಗೆರೆ ಕರ್ನಾಟಕದ ಹೃದಯಭೂಮಿ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಸೇತು. ತುಂಗಭದ್ರೆಯ ತಟದಲ್ಲಿ ವಿಸ್ತರಿಸಿಕೊಂಡ ವಿಶಿಷ್ಟ ಸಾಂಸ್ಕೃತಿಕ ಹಿರಿಮೆ ಮೇಳೈಸಿರುವ ದಾರ್ಶನಿಕ ನಾಡು. ಅನಾದಿಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ದಾವಣಗೆರೆ ಜಿಲ್ಲೆ ಭೌಗೋಳಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿಶೇಷ ಮಹತ್ವ ಪಡೆದಿದೆ. ಕರ್ನಾಟಕದಲ್ಲಿ ತನ್ನದೇ ಛಾಪು ಮೂಡಿಸಿರುವ ದಾವಣಗೆರೆ ಜಿಲ್ಲೆಯು ಕೃಷಿ, ಕೈಗಾರಿಕೆ, ಕಲೆ, ಶಿಲ್ಪಕಲೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಔನತ್ಯ ಗಳಿಸಿದೆ.1997 ರಲ್ಲಿ ನೂತನ ಜಿಲ್ಲೆಯಾಗಿ ರೂಪಗೊಂಡ ನಂತರ ದಾವಣಗೆರೆ ಜಿಲ್ಲೆ ಹೊಸ ಮನ್ವಂತರದತ್ತ ಮುನ್ನಡೆದಿದೆ. ಜಿಲ್ಲೆಯ ಸಾಹಿತ್ಯ, ಸಂಗೀತ, ಕಲೆ, ಜಾನಪದ ಆಟ. ಊಟ ಮತ್ತು ಅಭಿವೃದ್ಧಿ ವಿಚಾರಗಳ ಚಿಂತನ, ಮಂಥನ, ಅನಾವರಣ ನಮ್ಮ ದಾವಣಗೆರೆ ಹಬ್ಬ. ಬನ್ನಿ ಸವಿಯೋಣ ನಮ್ ಜಿಲ್ಲೆ ಆಟ, ಊಟ, ನೋಟ...



